ಇತ್ತೀಚೆಗೆ ಕೊರಿಯರ್ ನೆಪದಲ್ಲಿ ಬೆದರಿಸಿ ವಸೂಲಿ ಮಾಡೋದು ದಂಧೆ ಜೋರಾಗಿ ನಡೀತಾ ಇದೆ.. ಇತ್ತೀಚಿನ ದಿನಗಳಲ್ಲಿ, ಇಂತಹ ಕರೆಗಳು ದೇಶದ ಉದ್ದಗಲಕ್ಕೂ ಅನೇಕ ಜನರಿಗೆ ಬಂದಿವೆ. ಕೆಲವೊಮ್ಮೆ, ನಕಲಿ ಪಾಸ್ಪೋರ್ಟ್ಗಳು ಅಥವಾ ಮಾದಕ ಪದಾರ್ಥಗಳ ಹೆಸರನ್ನು ಹೇಳಿ ಅವರು ಜನರನ್ನು ಹೆದರಿಸಲು ಯತ್ನಿಸುತ್ತಿದ್ದಾರೆ. ಇದರಿಂದಾಗಿ, ಹೆದರಿದ ಜನರು ಭಯದಿಂದ ಹೊರಬರುಲು ಹಣ ನೀಡುತ್ತಿದ್ದಾರೆ. ಈ ರೀತಿಯ ಕೊರಿಯರ್ ವಂಚನೆಯ ಜಾಲ ನಮ್ಮ ದೇಶದಲ್ಲಿ ಹರಡುತ್ತಿದೆ.
ನಿಮ್ಮ ಆರೋಗ್ಯ ರಕ್ಷಣೆಗೆ ಆರೋಗ್ಯ ವಿಮೆ ಅತಿ ಮುಖ್ಯ.. ಕೊರೊನಾ ಸಾಂಕ್ರಾಮಿಕದ ನಂತರ ಜನರು ವಿಮೆಯ ಮಹತ್ವ ಅರಿತುಕೊಂಡಿದ್ದಾರೆ. ಆದ್ರೂ, ದೇಶದ ಸುಮಾರು ಶೇಕಡ 43 ರಷ್ಟು ಜನರು ಆರೋಗ್ಯ ವಿಮಾ ಪಾಲಿಸಿಗಳನ್ನ ಖರೀದಿಸಿಲ್ಲ. ಕಳೆದ ಎರಡು ವರ್ಷಗಳಲ್ಲಿ ವಿಮಾ ಪಾಲಿಸಿಗಳ ಪ್ರೀಮಿಯಂ ಮೊತ್ತ ಸುಮಾರು ಶೇಕಡ 40 ರಷ್ಟು ಹೆಚ್ಚಾಗಿದೆ ಅನ್ನೋದು ಸತ್ಯ. ಹಣದುಬ್ಬರದಿಂದಾಗಿ ಜನರು ವಿಮಾ ಪಾಲಿಸಿ ಖರೀದಿಸೋಕೆ ಹಿಂದೇಟು ಹಾಕ್ತಿದ್ದಾರೆ.. ಆದ್ರೆ ಇಲ್ಲಿವೆ ಒಂದಿಷ್ಟು ಆಘಾತಕಾರಿ ವಿಷಯಗಳು.
ನಿಮಗೇನಾದ್ರೂ ಬ್ರೇಕಿಂಗ್ ನ್ಯೂಸ್ ನೀಡುವಂತಹ ಒಬ್ಬ ಸ್ನೇಹಿತ ಇದ್ರೆ ತಕ್ಷಣ ಹುಷಾರಾಗಿ.. ಷೇರುಪೇಟೆಯಲ್ಲಿ ಹೂಡಿಕೆ ಮಾಡೋವಾಗ, ಹೂಡಿಕೆದಾರರು ಮೊದಲು ವದಂತಿಗಳಿಂದ ದೂರ ಇರಬೇಕು.. ಯಾಕಂದ್ರೆ, ಶೇ 60ರಷ್ಟು ಷೇರುಗಳ ಏರಿಳಿತಗಳಿಗೆ ವದಂತಿಗಳೇ ಕಾರಣ ಆಗಿರೋದು ಗಮನಕ್ಕೆ ಬಂದಿದೆ.. ಕೇವಲ ಶೇ 40ರಷ್ಟು ವ್ಯವಹಾರಗಳು ಮಾತ್ರವೇ ನಂಬಿಕಸ್ಥ ಮಾಹಿತಿಗಳು ಹಾಗೂ ಬಲವಾದ ಸುದ್ದಿಗಳನ್ನು ಅವಲಂಬಿಸಿವೆ. ಇದು ಕಟು ಸತ್ಯ.. ವಾಸ್ತವದಲ್ಲಿ, ಯಾವುದೇ ಸುದ್ದಿ ಬರೋಕ್ಕೂ ಮುಂಚೆ, ಮಾರುಕಟ್ಟೆ ತನ್ನದೇ ಆದ ಕಲ್ಪನೆಗಳನ್ನು ಮತ್ತು ಅಂದಾಜುಗಳನ್ನು ಮಾಡಿಕೊಳ್ಳುತ್ತೆ. ಯಾವುದೇ ಘಟನೆಗಳು ಅಥವಾ ಸುದ್ದಿಗಳು ನಿಜವಾಗಿ ನಡೆಯೋಕ್ಕೂ ಮುಂಚೆ ಅವುಗಳನ್ನು ಕಡೆಗಣಿಸೋದು ಷೇರುಪೇಟೆಯ ಸ್ವಭಾವ ಆಗಿದೆ.
ದೇಶದ ರಾಜಧಾನಿ ದೆಹಲಿಯಲ್ಲಿ ಒಂದು ಮನೆ ಕೊಂಡುಕೊಳ್ಳುವ ಆಸೆ ಯಾರಿಗೆ ಇರೋದಿಲ್ಲ ಹೇಳಿ..? ಈಗಂತೂ ದೆಹಲಿ ಅಭಿವೃದ್ಧಿ ಪ್ರಾಧಿಕಾರದ (ಡಿ.ಡಿ.ಎ.) ಸಾವಿರಾರು ಫ್ಲಾಟ್ಗಳು ಖಾಲಿ ಬಿದ್ದಿವೆ. ಈ ಹಿಂದೆ ಫ್ಲಾಟ್ಗಳನ್ನು ಕೊಳ್ಳಲು ಜನ ವರ್ಷಗಟ್ಟಲೆ ಕಾಯಬೇಕಾಗಿತ್ತು.. ಡಿಡಿಎ ಮನೆಗಳಿಗೆ ಡ್ರಾ ಎತ್ತುವಾಗ ಸಾವಿರಾರು ಜನರು ಉದ್ದನೆಯ ಸರತಿ ಸಾಲುಗಳಲ್ಲಿ ನಿಂತು ಕಾಯುತ್ತಿದ್ದರು. ಆದರೆ, ಇಂದು ಈ ಫ್ಲಾಟ್ಗಳು ಧೂಳು ಹಿಡಿಯುತ್ತಾ ಖಾಲಿ ಬಿದ್ದಿವೆ.
ಮಾರ್ಕೆಟ್ನಲ್ಲಿ ಹಲವು ಲೋನ್ ಆಪ್ಗಳಿವೆ. ಇವು ಕೆವೈಸಿ ಇಲ್ಲದೇ ಸಾಲ ಕೊಡುತ್ತವೆ. ಸಾಲ ಕಂತು ತುಂಬಲು ಸಾಲಗಾರರಿಗೆ ಸಾಧ್ಯವಾಗದೇ ಇದ್ದಾಗ ಬ್ಲಾಕ್ಮೇಲ್ ಶುರು ಮಾಡುತ್ತವೆ.. ಹಲವು ಅಕ್ರಮ ಇನ್ಸ್ಟಂಟ್ ಲೋನ್ ಆಪ್ಗಳಿವೆ. ಅದರಲ್ಲೂ ಕೆಲವು ಅಕ್ರಮ ಲೋನ್ ಆಪ್ಗಳಂತೂ ಫೋನ್ನಲ್ಲಿ ಡೌನ್ಲೋಡ್ ಆಗುತ್ತಲೇ ಫೋನ್ಲ್ಲಿರುವ ಎಲ್ಲ ಡೇಟಾವನ್ನು ಕಳ್ಳತನ ಮಾಡುತ್ತವೆ.
ವಂಚಕರು ನಿಮ್ಮನ್ನು ಹೇಗೆಲ್ಲಾ ತಮ್ಮ ಬಲೆಗೆ ಬೀಳಿಸುತ್ತಾರೆ ಗೊತ್ತಾ..? ನಿಮ್ಮ ನ್ಯೂನ್ಯತೆ ಕೊಂಚ ಸಿಕ್ಕಿದ್ರೂ ಸಾಕು ಅದನ್ನೇ ಬಂಡವಾಳ ಮಾಡಿಕೊಂಡು ನಿಮ್ಮನ್ನು ವಂಚಿಸುತ್ತಾರೆ.. ಇತ್ತೀಚಿನ ದಿನಗಳಲ್ಲಿ ಯುವ ಜನತೆ ವರ್ಕ್ ಫ್ರಂ ಹೋಮ್ ಸಿಕ್ರೆ ಖುಷಿ ಖುಷಿಯಿಂದ ಮಾಡ್ತಾರೆ.. ಅದು ಯಾವ ಕಂಪನಿ ಅದರ ಹಿನ್ನೆಲೆ ಏನು ಅನ್ನೋದನ್ನು ತಿಳಿದುಕೊಳ್ಳದೇ ಕೆಲಸ ಮಾಡೋದಕ್ಕೆ ಒಪ್ಪಿಕೊಳ್ಳುತ್ತಾರೆ.. ಇದನ್ನೇ ಬಂಡವಾಳ ಮಾಡಿಕೊಂಡಿರುವ ವಂಚಕರು ವರ್ಕ್ ಫ್ರಂ ಹೋಮ್ ಹೆಸರಿನಲ್ಲಿ ವಂಚನೆ ಇಳಿದಿದ್ದಾರೆ..
ಇದು ನಿಮ್ಮ ಇನ್ಕಮ್ ಟ್ಯಾಕ್ಸ್ ರಿಟರ್ನ್ ಫೈಲ್ ಮಾಡೋ ಸಮಯ.. ಹಣಕಾಸು ವರ್ಷ 2022-23ರ ಟ್ಯಾಕ್ಸ್ ರಿಟರ್ನ್ ಸಲ್ಲಿಸಕ್ಕೆ ತುಂಬಾ ಜನ ಸಿದ್ಧತೆ ಮಾಡ್ಕೋತಿದಾರೆ.. ಅಸೆಸ್ಮೆಂಟ್ ಇಯರ್ 2023-24 ರ ರಿಟರ್ನ್ನಲ್ಲಿ ಕೆಲವು ಮಹತ್ವದ ಬದಲಾವಣೆ ಮಾಡಿದ್ದಾರೆ.
ಇತ್ತೀಚೆಗೆ ಆನ್ಲೈನ್ ಫ್ರಾಡ್ಗಳು ಹೆಚ್ಚಾಗುತ್ತಿವೆ.. ವಂಚಕರು ಒಂದಲ್ಲಾ ಒಂದು ರೀತಿಯಲ್ಲಿ ಜನರನ್ನ ಮೋಸದ ಬಲೆಗೆ ಬೀಳಿಸುತ್ತಿದ್ದಾರೆ.. ದೆಹಲಿಯಲ್ಲೂ ಈ ವಂಚಕರ ಕೈ ಚಳಕ ಜೋರಾಗಿ ನಡೀತಾ ಇದೆ.. ಜನರನ್ನು ಮೋಸದ ಬಲೆಗೆ ಬೀಳಿಸಲು ವಂಚಕರು ಆಯ್ದುಕೊಂಡಿರೋದು ಸರ್ಕಾರಿ ಪ್ರಾಧಿಕಾರವನ್ನು.. ಇತ್ತೀಚೆಗೆ ಕಳ್ಳರು ನಿಮ್ಮ ಮನೆ ಬೀಗ ಒಡೀತಿಲ್ಲ.. ಆನ್ಲೈನ್ನಲ್ಲೇ ಕನ್ನ ಹಾಕ್ತಿದ್ದಾರೆ..
ಕಳೆದ ವರ್ಷದ ಮೇ ತಿಂಗಳಲ್ಲಿ, ಷೇರುಪೇಟೆ ನಿಯಂತ್ರಕ ಸಂಸ್ಥೆ ಸೆಬಿ ಒಟ್ಟು ವೆಚ್ಚಾನುಪಾತದ (ಎಕ್ಸ್ಪೆನ್ಸ್ ರೇಷಿಯೋ) ಮೇಲೆ ಒಂದು ಸಲಹಾ ಪತ್ರವನ್ನು ಹೊರ ತಂದಿತ್ತು. ಅದು ಸಣ್ಣ ಹೂಡಿಕೆದಾರರಿಗೆ ಲಾಭ ನೀಡುವ ಹಲವು ಪ್ರಮುಖ ಪ್ರಸ್ತಾವಗಳನ್ನು ಒಳಗೊಂಡಿತ್ತು.
ಮಾರುಕಟ್ಟೆಗೆ 80 ಕಂಪನಿಗಳು ತಮ್ಮ ಐಪಿಒ ಬಿಡುಗಡೆಗೆ ಒಂದು ಕಡೆ ಸಿದ್ಧತೆ ಮಾಡಿಕೊಂಡಿದ್ದರೆ ಬಾಬಾ ರಾಮ್ ದೇವ್ ಅವರ ಪತಂಜಲಿ ಹೊಸದೊಂದು ಟಾರ್ಗೆಟ್ ಇಟ್ಟುಕೊಂಡು ಮುಂದಡಿ ಇಟ್ಟಿದೆ.