Home > Exclusive
ಆದರೆ ಭಾರತ ಮತ್ತು ದಕ್ಷಿಣ ಆಫ್ರಿಕಾ ಈ ಒಪ್ಪಂದಕ್ಕೆ ಆಕ್ಷೇಪಣೆ ಸಲ್ಲಿಸಿದ್ದವು. ಈ ಒಪ್ಪಂದದ ಪ್ರಯೋಜನ ಸಂಘಟನೆ ಸೇರುವ ಪ್ರತಿಯೊಂದು ರಾಷ್ಟ್ರಕ್ಕೂ ಲಭ್ಯವಾಗಬೇಕು ಎಂದು ಭಾರತ ವಾದ ಮಂಡಿಸಿತ್ತು.
ನೈಜ ಹಣದುಬ್ಬರವು ಎಂದಿಗೂ ಚಿಲ್ಲರೆ ಹಣದುಬ್ಬರಕ್ಕಿಂತ ಹೆಚ್ಚಿರುತ್ತದೆ. ಹೀಗಾಗಿ, ಒಬ್ಬ ವ್ಯಕ್ತಿಯ ಇನ್ವೆಸ್ಟ್ಮೆಂಟ್ ಪೋರ್ಟ್ಫೋಲಿಯೋ 8 ಪರ್ಸೆಂಟ್ ರಿಟರ್ನ್ ನೀಡುತ್ತಿದ್ದರೆ, ಆಗ ಆ ವ್ಯಕ್ತಿಯ ಹೂಡಿಕೆ ಇನ್ಫ್ಲೇಶನ್ ಅನ್ನು ಎದುರಿಸುವುದಕ್ಕೆ ಸಾಧ್ಯವಾಗುವುದಿಲ್ಲ.
ಆಂಧ್ರಪ್ರದೇಶ, ಕರ್ನಾಟಕ ಮತ್ತು ಮಹಾರಾಷ್ಟ್ರದ ಮಂಡಿಗಳಿಂದ ತಕ್ಷಣವೇ ಟೊಮ್ಯಾಟೋ ಖರೀದಿ ಮಾಡಬೇಕು ಅಂತ ತಿಳಿಸಲಾಗಿದೆ. ದೆಹಲಿ-ಎನ್ಸಿಆರ್ ಪ್ರದೇಶದ ಗ್ರಾಹಕರಿಗೆ ಈ ಶುಕ್ರವಾರದಿಂದ ಅಂದರೆ ಜುಲೈ 14ರಿಂದ ಟೊಮ್ಯಾಟೋ ವಿತರಿಸಲಿದೆ.
ಕಳೆದ ವರ್ಷ ತಮಿಳುನಾಡು ಸಿಎಂ ಎಂಕೆ ಸ್ಟಾಲಿನ್ ಅವರು ಕೇಂದ್ರ ವಾಣಿಜ್ಯ ಮತ್ತು ವ್ಯಾಪಾರ ಸಚಿವಾಲಯಕ್ಕೆ ಬರೆದ ಒಂದು ಪತ್ರ ಬಹಳ ಪ್ರಸ್ತುತ ಎನಿಸುತ್ತದೆ. ಅದರಲ್ಲಿ ಅವರು ಸಿಗರೇಟು ಲೈಟರ್ಗಳ ಆಮದನ್ನೇ ನಿಷೇಧಿಸುವಂತೆ ಒತ್ತಾಯಿಸಿದ್ದರು. ಲೈಟರ್ಗಳಿಂದ ಭಾರತದ ಸಾಂಪ್ರದಾಯಿಕ ಬೆಂಕಿ ಕಡ್ಡಿ (ಮ್ಯಾಚ್ ಬಾಕ್ಸ್) ತಯಾರಕರು ಸಂಕಷ್ಟ ಅನುಭವಿಸುತ್ತಿದ್ದಾರೆ ಅನ್ನೋದನ್ನು ತಿಳಿಸಿದ್ದರು.
ನಿರಂತರ ಊಹಾಪೋಗಳು ಮತ್ತು ಪ್ರಶ್ನೆಗಳು ಎದ್ದಿದ್ದರಿಂದ ಈ ಕ್ರಮ ತಗೆದುಕೊಂಡಿದ್ದೇವೆ ಅಂತ ಅಧ್ಯಕ್ಷರು ತಿಳಿಸಿದ್ದಾರೆ. ಷೇರುದಾರರೊಂದಿಗೆ ಮಾತನಾಡಿದ ಚಂದ್ರಶೇಖರನ್, “ನೈತಿಕ ನಡವಳಿಕೆಯನ್ನು ಅನುಸರಿಸದ ಆರು ಉದ್ಯೋಗಿಗಳನ್ನು ನಾವು ಕಂಡುಕೊಂಡಿದ್ದೇವೆ. ಅವರ ವರ್ತನೆಯನ್ನು ನಾವು ಪ್ರೋತ್ಸಾಹಿಸಲು ಸಾಧ್ಯವಿಲ್ಲ ಹೀಗಾಗಿ ದಿಟ್ಟ ಕ್ರಮ ತೆಗೆದುಕೊಂಡಿದ್ದೇವೆ ಎಂದು ತಿಳಿಸಿದ್ದಾರೆ.
ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಲ್ಲಿ (PM Kisan Samman Nidhi Yojana) ಕೇಂದ್ರದ 14ನೇ ಕಂತಿನ ಹಣ ಬಿಡುಗಡೆಗೆ ದಿನಗಣನೆ ನಡೆದಿದೆ. ಯಾವಾಗ ಬೇಕಾದರೂ ಕಂತಿನ ಹಣ ಬಿಡುಗಡೆ ಆಗಬಹುದು. ಈ ವಾರವೇ 2,000 ರೂ ಬಿಡುಗಡೆ ಆಗುವ ಸಾಧ್ಯತೆ ಇಲ್ಲದಿಲ್ಲ. ಆದರೆ, 13ನೇ ಕಂತಿನ ಹಣ ಲಕ್ಷಾಂತರ ರೈತರಿಗೆ ಸಿಕ್ಕಿರಲಿಲ್ಲ. 13ನೇ ಕಂತು ಬಿಡುಗಡೆಗೂ ಮುನ್ನ ಸರ್ಕಾರ ಪಿಎಂ ಕಿಸಾನ್ ಯೋಜನೆಯ ಫಲಾನುಭವಿಗಳಿಗೆ ಇಕೆವೈಸಿ ಅಪ್ಡೇಟ್ ಮಾಡಲು ಹೇಳಿತ್ತು. ಇದನ್ನು ಮಾಡದವರಿಗೆ 13ನೇ ಕಂತಿನ ಹಣ ಸಿಕ್ಕಿರಲಿಲ್ಲ.
PM-Kisan Mobile App ಫೇಸ್ ದೃಢೀಕರಣ ಸೌಲಭ್ಯವನ್ನು ಪರಿಚಯಿಸ್ತಾ ಇದೆ....ರೈತರು OTP ಅಥವಾ ಫಿಂಗರ್ಪ್ರಿಂಟ್ ಇಲ್ಲದೆಯೇ ತಮ್ಮ ಮುಖವನ್ನು ಸ್ಕ್ಯಾನ್ ಮಾಡಿ e-KYC ಅನ್ನು ಮಾಡಬಹುದು.... ತಂತ್ರಜ್ಞಾನವನ್ನು ಬಳಸಿಕೊಂಡು ಯೋಜನೆ ಅನುಷ್ಠಾನ ತುಂಬಾ ಸುಲಭವಾಗಿದೆ... PM-Kisan ಮೊಬೈಲ್ ಅಪ್ಲಿಕೇಶನ್ ಮೂಲಕ ರೈತರು OTP ಅಥವಾ ಫಿಂಗರ್ಪ್ರಿಂಟ್ ಇಲ್ಲದೆ ತಮ್ಮ ಮುಖವನ್ನು ಸ್ಕ್ಯಾನ್ ಮಾಡಿಕೊಂಡು ಇ-ಕೆವೈಸಿ ಪೂರ್ಣಗೊಳಿಸಬಹುದು... ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಅಡಿಯಲ್ಲಿ, ಅರ್ಹ ರೈತರು ಪ್ರತಿ ನಾಲ್ಕು ತಿಂಗಳಿಗೊಮ್ಮೆ 2,000 ರೂ.ಗಳನ್ನು ಪಡೆಯುತ್ತಾರೆ.... ವರ್ಷಕ್ಕೆ ಮೂರು ಸಮಾನ ಕಂತುಗಳಲ್ಲಿ ಒಟ್ಟು 6 ಸಾವಿರ ಸಿಗುತ್ತಿದ್ದು ರಾಜ್ಯಗಳು ಸಹ ಕೆಲಕವೆಡೆ ಹೆಚ್ಚಿನ ಹಣ ಹಾಕುತ್ತಿವೆ.
ಟಿಸಿಎಸ್ನಲ್ಲಿ ಇಂಥದ್ದೊಂದು ಭ್ರಷ್ಟಾಚಾರ ಹಗರಣ ಬಯಲಿಗೆ ಬಂದಿದ್ದು ಇದೇ ಮೊದಲು. ಸಂಸ್ಥೆಯ ಹಿರಿಯರಾದ ಕೆ ಕೃತಿವಾಸನ್ ಅವರು ಸಿಇಒ ಆಗಿ ನೇಮಕವಾದ ಕೆಲವೇ ದಿನಗಳಲ್ಲಿ ಈ ಬೆಳವಣಿಗೆ ಆಗಿದೆ. ಗಮನಿಸಬೇಕಾದ ಸಂಗತಿ ಎಂದರೆ ಉದ್ಯೋಗ ಹಂಚಿಕೆಗೆ ಲಂಚ ಸ್ವೀಕರಿಸುವ ಕಾರ್ಯ ಕಳೆದ 3 ವರ್ಷಗಳಿಂದ ನಡೆದಿತ್ತು ಎಂದು ಹೇಳಲಾಗುತ್ತಿದೆ.
ಅದಾನಿ ಗ್ರೂಪ್ ಸಂಸ್ಥೆ ತನ್ನ ಕಂಪನಿಗಳ ಷೇರುಬೆಲೆಗಳು ಕೃತಕವಾಗಿ ಉಬ್ಬುವಂತೆ ಮಾಡಿದೆ ಎಂಬುದು ಆ ವರದಿಯಲ್ಲಿದ್ದ ಪ್ರಮುಖ ಆರೋಪ. ಅದಾನಿ ಗ್ರೂಪ್ ಮತ್ತು ಹಿಂಡನ್ಬರ್ಗ್ ವರದಿ ಪ್ರಕರಣವನ್ನು ಭಾರತದ ಸರ್ವೋಚ್ಚ ನ್ಯಾಯಾಲಯದ ಸೂಚನೆ ಮೇರೆಗೆ ಸೆಬಿ ತನಿಖೆ ನಡೆಸುತ್ತಿದೆ.
ಚಾಟ್ ಜಿಪಿಟಿ ಬಳಸ್ತಾ ಇದ್ದ ಒಂದು ಲಕ್ಷಕ್ಕೂ ಹೆಚ್ಚು ಜನರ ಪರ್ಸನಲ್ ಡೇಟಾ ಕಳ್ಳತನ ಆಗಿದೆ. ಸಿಂಗಾಪುರದ ಒಂದು ಸೈಬರ್ ಸೆಕ್ಯುರಿಟಿ ಕಂಪನಿ ಗ್ರೂಪ್ ಐಬಿ ಈ ಸುದ್ದಿಯನ್ನು ಬಹಿರಂಗಗೊಳಿಸಿದೆ.