ಸಮೀಕ್ಷೆಯ ಪ್ರಕಾರ, ಬಿಹಾರವು ದೇಶದ ಎಲ್ಲಾ ರಾಜ್ಯಗಳಲ್ಲಿ ಅತ್ಯಂತ ಬಡವಾಗಿದೆ. ಬಿಹಾರದ ಕುಟುಂಬಗಳ ಸರಾಸರಿ ಮಾಸಿಕ ಆದಾಯ ಕೇವಲ 17,567 ರೂ. ಇದೆ. ಇನ್ನು 18,519 ರೂ. ಮಾಸಿಕ ಆದಾಯದೊಂದಿಗೆ ಬಡತನದಲ್ಲಿ ಒಡಿಶಾ ಎರಡನೇ ಸ್ಥಾನದಲ್ಲಿದ್ದರೆ 18,863 ರೂ. ಮಾಸಿಕ ಆದಾಯದೊಂದಿಗೆ ಜಾರ್ಖಂಡ್ ಮೂರನೇ ಸ್ಥಾನದಲ್ಲಿದೆ. ತಮ್ಮ ಮಾಸಿಕ ಖರ್ಚುಗಳನ್ನು ಪೂರೈಸಲು ಸಾಧ್ಯವಾಗದ ಹೆಚ್ಚಿನ ಕುಟುಂಬಗಳು ಈ ರಾಜ್ಯದಲ್ಲೇ ಇವೆ.
ಪಡಿತರ ಮತ್ತು ಇಂಧನ ಹೊರತುಪಡಿಸಿ, ಸಂಬಳದ ಸುಮಾರು ಶೇ. 12ರಷ್ಟನ್ನು ವಿದ್ಯುತ್, ನೀರು ಮತ್ತು ಇಂಟರ್ನೆಟ್ ಬಿಲ್ಗಳನ್ನು ಪಾವತಿಸಲು ಖರ್ಚು ಮಾಡಲಾಗುತ್ತದೆ. ಅಂದರೆ, ನಾವು ಪಡಿತರ, ಇಂಧನ, ವಿದ್ಯುತ್, ನೀರು ಮತ್ತು ಇಂಟರ್ನೆಟ್ ಬಿಲ್ಗಳನ್ನು ಒಟ್ಟಿಗೆ ಸೇರಿಸಿದರೆ, ಸಂಬಳದ ಶೇಕಡಾ 39 ರಷ್ಟು ಖರ್ಚಾಗುತ್ತದೆ.
ಕುಟುಂಬಗಳಲ್ಲಿ ಉಳಿತಾಯ ಹೆಚ್ಚಾಗಲು ಕೊರೋನಾ ಕೂಡ ಪ್ರಮುಖ ಕಾರಣ ಎನ್ನುವುದು ಸಮೀಕ್ಷೆಯಲ್ಲಿ ಕಂಡುಬಂದ ಪ್ರಮುಖ ಅಂಶ. ಕೊರೋನಾ ಪರಿಣಾಮ ಜನರ ಗಳಿಕೆಯ ಮೇಲೆ ಕಾಣಿಸುತ್ತಿತ್ತು. ಕೊರೋನಾ ನಂತರದಲ್ಲಿ ಜನ ಭವಿಷ್ಯದ ಬಗ್ಗೆ ಮತ್ತಷ್ಟು ಚಿಂತಿಸಿದರು. ಉಳಿತಾಯದ ಮಹತ್ವ ಅರಿತುಕೊಂಡರು. ಕೊರೋನಾ ಪ್ರಭಾವ ಕಡಿಮೆಯಾದ ತಕ್ಷಣ, ಜನರು ತಮ್ಮ ಉಳಿತಾಯವನ್ನು ಹೆಚ್ಚಿಸಲು ಪ್ರಾರಂಭಿಸಿದರು.
ಮುಂದಿನ ಆರು ತಿಂಗಳಲ್ಲಿ ಕಾರು, ಬೈಕ್, ಮತ್ತು ಸ್ಮಾರ್ಟ್ಫೋನ್ಗಳಿಗೆ ಬೇಡಿಕೆ ಹೇಗೆ ಹೆಚ್ಚಲಿದೆಯಾ? ಹೌದು ಎನ್ನುತ್ತಿದೆ Money9ನ ಪರ್ಸನಲ್ ಫೈನಾನ್ಸ್ ಸಮೀಕ್ಷೆ. ಮುಂದಿನ 6 ತಿಂಗಳಲ್ಲಿ ಎಷ್ಟು ಭಾರತೀಯ ಕುಟುಂಬಗಳು ತಮಗಾಗಿ ದ್ವಿಚಕ್ರ ವಾಹನ ಅಥವಾ ಕಾರು ಖರೀದಿಸಲು ಯೋಜಿಸುತ್ತಿವೆ ಎಂಬ ಮಾಹಿತಿಯನ್ನು ಸಮೀಕ್ಷೆ ತೆರೆದಿರಿಸಿದೆ.
ಸಮೀಕ್ಷೆಯ ಪ್ರಕಾರ, ಕೇವಲ ಶೇ. 24ರಷ್ಟು ಭಾರತೀಯರು ಮಾತ್ರ ತೆರಿಗೆ ಪಾವತಿಸಲು ಸಂಪೂರ್ಣ ಸಿದ್ಧರಿದ್ದಾರೆ. ಇನ್ನು ಶೇ. 29 ರಷ್ಟು ಭಾರತೀಯರು ತೆರಿಗೆ ಪಾವತಿಸಲು ಬಯಸುತ್ತಿದ್ದರೂ ಒಂದು ಮಿತಿಯೊಳಗಿನ ತೆರಿಗೆ ನೀಡಲು ಸಿದ್ಧರಿದ್ದಾರೆ. ಸಮೀಕ್ಷೆಯ ಅಂಕಿಅಂಶಗಳ ಪ್ರಕಾರ, ಸುಮಾರು ಅರ್ಧದಷ್ಟು ಭಾರತೀಯರು ಕಡಿಮೆ ತೆರಿಗೆ ದರ ಬಯಸುತ್ತಿದ್ದಾರೆ.