-
ಧ್ರುವ ಆನ್ಲೈನ್ ನಲ್ಲಿ ಆರೋಗ್ಯ ವಿಮೆ ಪಾಲಿಸಿ ನೋಡುತ್ತಿದ್ದಾರೆ. ಆಗ ಅವರ ಫ್ರೆಂಡ್ ಅಭಿಷೇಕ್ ನೀವೇನಾದರೂ ಇನ್ನೊಂದು ಫಾರಿನ್ ಟ್ರಿಪ್ ಪ್ಲಾನ್ ಮಾಡಿದ್ದೀರಾ ಅಂತ ಕೇಳಿದರು. ಅದಕ್ಕೆ ಧ್ರುವ, ಇಲ್ಲ ನಾನು ಹೆಲ್ತ್ ಪಾಲಿಸಿ ನೋಡುತ್ತಿರೋದಾಗಿ ಹೇಳುತ್ತಾರೆ. ಕಳೆದ ಬಾರಿ ಆಸ್ಪತ್ರೆಗೆ ದಾಖಲಾದಾಗ ಅವರು ತಮ್ಮ ಹೂಡಿಕೆಯನ್ನ ಹಿಂಪಡೆದುಕೊಂಡರು. ಅಲ್ಲದೇ ಆಸ್ಪತ್ರೆ ಬಿಲ್ ಪಾವತಿಸಲು ಸಂಬಂಧಿಕರಿಂದ ಸಾಲ ಕೂಡ ಪಡೆಯಬೇಕಾಯಿತು. ಅಭಿಷೇಕ್ ಧ್ರುವ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು ಮತ್ತು ನಾನೂ ಕೂಡ ಹೆಲ್ತ್ ಪಾಲಿಸಿ ಖರೀದಿ ಮಾಡಿದ್ದೇನೆ ಅಂತ ಹೇಳಿದರು. ಆದರೆ ಆ ಹೆಲ್ತ್ ಕವರ್ ಸಾಕಾಗುತ್ತಾ ಅಂತ ಧ್ರುವ, ಅಭಿಷೇಕ್ ರನ್ನು ಕೇಳಿದರು.
-
ಇನ್ಶುರೆನ್ಸ್ ಕಂಪನಿಗಳೂ ಈಗ ಬ್ಯಾಂಕ್ಗಳ ಹಾಗೆ ಕ್ಲೇಮ್ ಮಾಡದೇ ಇರುವ ಹಣವನ್ನು ತಮ್ಮ ಗ್ರಾಹಕರಿಗೆ ವಾಪಸ್ ಮಾಡುತ್ತವೆ. ಇನ್ಶುರೆನ್ಸ್ ಕಂಪನಿಗಳ ಬಳಿ ಈ ಅನ್ಕ್ಲೇಮ್ಡ್ ಹಣ ಹೆಚ್ಚಾಗುತ್ತಲೇ ಇರುವ ಬಗ್ಗೆ ರೆಗ್ಯುಲೇಟರ್ ಮತ್ತು ಸರ್ಕಾರಗಳಿಗೆ ಆತಂಕ ಆಗಿದೆ. ಇನ್ಶುರೆನ್ಸ್ ರೆಗ್ಯುಲೇಟರಿ ಆಂಡ್ ಡೆವಲಪ್ಮೆಂಟ್ ಅಥಾರಿಟಿ ಆಫ್ ಇಂಡಿಯಾ IRDA ಇದಕ್ಕೆ ಸಂಬಂಧಿಸಿದಂತೆ ಸುತ್ತೋಲೆ ಹೊರಡಿಸಿದೆ. ಪಾಲಿಸಿದಾರರಿಗೆ ಈ ಅನ್ಕ್ಲೇಮ್ಡ್ ಹಣವನ್ನು ರಿಟರ್ನ್ ಮಾಡಿ ಅಂತ ಇನ್ಶುರೆನ್ಸ್ ಕಂಪನಿಗಳಿಗೆ IRDA ಸೂಚನೆ ನೀಡಿದೆ. ಬಾಕಿ ಇರುವ ಹಣ ಯಾರಿಗೆ ಸೇರಿದ್ದೋ ಅವರನ್ನು ಹುಡುಕುವಂತೆಯೂ ವಿಮೆ ಕಂಪನಿಗಳಿಗೆ ಇದು ತಿಳಿಸಿದೆ.
-
ವಿಮಾ ನಿಯಂತ್ರಕ ಐಆರ್ಡಿಎ, ಜೀವ ವಿಮಾ ಪಾಲಿಸಿಗಳ ಸರಂಡರ್ ವ್ಯಾಲ್ಯೂಗೆ ಸಂಬಂಧಿಸಿದ ನಿಯಮಗಳಲ್ಲಿ ಬದಲಾವಣೆ ತಂದಿದೆ. ಮೆಚ್ಯುರಿಟಿಗೂ ಮೊದಲೇ ವಿಮಾ ಪಾಲಿಸಿಯನ್ನ ಕ್ಲೋಸ್ ಮಾಡಿದರೆ ಅದನ್ನು ಸರಂಡರ್ ಎಂದು ಕರೆಯಲಾಗುತ್ತದೆ. ನೀವು ಪಾಲಿಸಿಯನ್ನು ಸರಂಡರ್ ಮಾಡಿದ್ರೆ, ನೀವು ಪಾವತಿಸಿರುವ ಪ್ರೀಮಿಯಂನ ಒಂದು ಭಾಗ ಸಿಗುತ್ತದೆ. ಇದೇ ಸರಂಡರ್ ವ್ಯಾಲ್ಯೂ. ಏಪ್ರಿಲ್ 1 ರಿಂದ ಈ ಸರಂಡರ್ ವ್ಯಾಲ್ಯೂ ಗೆ ಸಂಬಂಧಿಸಿದಂತೆ ಹೊಸ ನಿಯಮಗಳು ಜಾರಿಗೆ ಬಂದಿವೆ.
-
ವರದಿಯ ಪ್ರಕಾರ, ಲೈಫ್ ಇನ್ಶುರೆನ್ಸ್ ಕಂಪನಿಗಳ ಬಳಿ ಕ್ಲೇಮ್ ಮಾಡದ ಹಣವೇ 25 ಸಾವಿರ ಕೋಟಿ ರೂ. ಇದೆ. ಇದರಲ್ಲಿ ಅತಿದೊಡ್ಡ ಪಾಲು ಅಂದರೆ 84% ಅಂದರೆ ಸುಮಾರು 21 ಸಾವಿರ ಕೋಟಿ ರೂ. ಎಲ್ಐಸಿ ಬಳಿಯೇ ಇದೆ.
-
ಮೈಸೂರಿನ ಅಮರ್ ತನ್ನ ಮಗಳ ವಿವಾಹಕ್ಕೆ ಸಿದ್ಧವಾಗುತ್ತಿದ್ದಾರೆ. ಮದುವೆಗೆ ಬೇಕಾಗಿರುವ ಹೋಟೆಲ್ಗಳು, ಸಂಗೀತಗಾರರು, ಬ್ಯೂಟಿಶಿಯನ್ಗಳು ಸೇರಿದಂತೆ ಎಲ್ಲರನ್ನೂ ಅವರು ಬುಕ್ ಮಾಡಿದ್ದಾರೆ. ವಿವಾಹಕ್ಕೆ ಇನ್ನು ಬರಿ 15 ದಿನಗಳು ಬಾಕಿ ಇವೆ. ದುರಾದೃಷ್ಟವಶಾತ್ ಅವರ ಅಳಿಯನಾಗುವವ ಅಪಘಾತಕ್ಕೀಡಾದ. ಇದರಿಂದ ವಿವಾಹವನ್ನು ಮುಂದೂಡುವುದು ಅನಿವಾರ್ಯವಾಯಿತು. ಇದರಿಂದ ಅಮರ್ಗೆ ಲಕ್ಷಾಂತರ ರೂಪಾಯಿ ನಷ್ಟವಾಯಿತು.
ಮಗಳ ಮದುವೆಗೆ ಅಮರ್ ಇನ್ಶುರೆನ್ಸ್ ತೆಗೆದುಕೊಂಡಿದ್ದರೆ, ಇಷ್ಟು ನಷ್ಟವನ್ನು ಅವರು ಎದುರಿಸಬೇಕಿಲಿಲ್ಲ.
-
ಪಾಲಿಸಿ ಏನಾದ್ರೂ ಸಿಂಗಲ್ ಪ್ರೀಮಿಯಂ ಆಗಿದ್ದರೆ ಆಗ ಅದನ್ನ ಎರಡು ವರ್ಷದ ಬಳಿಕ ಸರಂಡರ್ ಮಾಡಬಹುದು. ಹೊಸ ನಿಯಮಗಳಡಿಯಲ್ಲಿ, ಮೂರನೇ ವರ್ಷದಲ್ಲಿ ಒಟ್ಟು ಪ್ರೀಮಿಯಂ ಮೊತ್ತದ ಶೇಕಡ 75 ರಷ್ಟನ್ನ ರೀಫಂಡ್ ಮಾಡಲಾಗುತ್ತದೆ. ಒಂದು ವೇಳೆ ಪಾಲಿಸಿಯ ಕೊನೆಯ ಎರಡು ವರ್ಷದಲ್ಲಿ ಸರಂಡರ್ ಮಾಡಿದರೆ ಆಗ ಶೇಕಡ 90 ರಷ್ಟು ಹಣ ಸಿಗುತ್ತದೆ.
-
ಬದಲಾಗುತ್ತಿರುವ ಜೀವನಶೈಲಿಯಿಂದಾಗಿ ಆರೋಗ್ಯ ಸಮಸ್ಯೆಗಳು ಹೆಚ್ಚಾಗುತ್ತಿದೆ. ನೀವು ಅನಾರೋಗ್ಯದಿಂದ ಬಳಲುತ್ತಿರುವಾಗ ಆರೋಗ್ಯ ವಿಮೆ ನಿಮ್ಮ ಚಿಕಿತ್ಸಾ ವೆಚ್ಚ ಭರಿಸಲು ನಿಮ್ಮ ನೆರವಿಗೆ ಬರುತ್ತದೆ. ಕೆಲವೊಮ್ಮೆ ಗಂಭೀರ ಕಾಯಿಲೆಗಳಿಂದಾಗಿ, ನೀವು ಆಸ್ಪತ್ರೆಯಲ್ಲಿ ಹೆಚ್ಚು ದಿನ ಇರಬೇಕಾಗಿ ಬಂದರೆ ಆಗ ಚಿಕಿತ್ಸಾ ವೆಚ್ಚ ನಿಮ್ಮ ಉಳಿತಾಯವನ್ನೆಲ್ಲಾ ನುಂಗಿ ಹಾಕಬಹುದು. ಕೆಲವೊಂದು ಸಲ ನೀವು ಕೆಲಸ ಮತ್ತು ಆದಾಯ ಎರಡನ್ನು ಕಳೆದುಕೊಳ್ಳುವ ಸಂದರ್ಭ ಬರಬಹುದು. ಇದರಿಂದಾಗಿ ನಿಮಗೆ ಮತ್ತು ನಿಮ್ಮ ಕುಟುಂಬಕ್ಕೆ ನಿಮ್ಮ ವೈದ್ಯಕೀಯ ಅಗತ್ಯಗಳಿಗೆ ಹಾಗೇ ಕೌಟುಂಬಿಕ ಅಗತ್ಯಗಳಿಗೆ ಹಣ ಹೊಂದಿಸೋದು ಕಷ್ಟವಾಗುತ್ತದೆ.
-
ವೈದ್ಯಕೀಯ ಚಿಕಿತ್ಸೆಯ ಹೆಚ್ಚಿನ ವೆಚ್ಚ ನೋಡಿದರೆ ಆರೋಗ್ಯ ವಿಮೆ ಅಗತ್ಯ ಎಷ್ಟಿದೆ ಎನ್ನುವುದು ನಮಗೆ ಗೊತ್ತಾಗುತ್ತದೆ. ಅದು ಆಸ್ಪತ್ರೆ ಖರ್ಚುಗಳಿಂದ ನಿಮ್ಮ ಜೇಬು ಬರಿದಾಗುವುದನ್ನು ತಪ್ಪಿಸುತ್ತದೆ.
-
ಬೆಂಗಳೂರಿನ ಖಾಸಗಿ ಸಂಸ್ಥೆಯಿಂದ ನಿವೃತ್ತರಾದ ಮಹೇಶ ನಿವೃತ್ತಿ ವೇಳೆ ಕಂಪನಿಯಿಂದ ದೊಡ್ಡ ಮೊತ್ತದ ಹಣ ಪಡೆದರು. ಈ ಹಣ ಹೂಡಿಕೆ ಮಾಡಲು ದಾರಿ ಹುಡುಕುತ್ತಾ ಮಹೇಶ್ ಬ್ಯಾಂಕ್ಗೆ ಹೋದರು. ಬ್ಯಾಂಕ್ ಮ್ಯಾನೇಜರ್ ಅವರಿಗೆ ವಿಮಾ ಉಳಿತಾಯ ಅಥವಾ ಇನ್ಶೂರೆನ್ಸ್ ಸೇವಿಂಗ್ಸ್ ಯೋಜನೆಯಲ್ಲಿ ಹೂಡಿಕೆ ಮಾಡಲು ಸಲಹೆ ನೀಡಿದರು. ಈ ಪಾಲಿಸಿಗೆ ಸಂಬಂಧಿಸಿದ ಅನೇಕ ಲಾಭಗಳನ್ನು ಬ್ಯಾಂಕ್ ಮ್ಯಾನೇಜರ್ ತಿಳಿಸಿದರು. ಅವರ ಸಲಹೆ ಆಧರಿಸಿಕೊಂಡೆ ಮಹೇಶ್ ಪಾಲಿಸಿ ಖರೀದಿ ಮಾಡಿದ್ರು. ಖರೀದಿ ನಂತರ ಈ ಪಾಲಿಸಿ ಪ್ರಯೋಜನಕಾರಿಯಲ್ಲ ಅನ್ನೋದು ಮಹೇಶ್ಗೆ ಮನದಟ್ಟಾಯಿತು. ಮಹೇಶ ಅವರಿಗೆ ಒಂದು ರೀತಿಯಲ್ಲಿ ವಂಚನೆಯಾಗಿತ್ತು. ತಪ್ಪು ಮಾಹಿತಿ ನೀಡಿ ಅವರಿಗೆ ಪಾಲಿಸಿ ಮಾರಲಾಗಿತ್ತು.
-
ಕರ್ನಾಟಕದ ಧಾರವಾಡದಲ್ಲಿನ ಜವಳಿ ಕಂಪೆನಿಯಲ್ಲಿ ಕೆಲಸ ಮಾಡುತ್ತಿರುವ ರಮೇಶ್ ಗೌಡ ಸಂಕಷ್ಟದಲ್ಲಿದಾರೆ. ನಿವೃತ್ತಿಯಾಗಿ ಆರು ತಿಂಗಳಾದರೂ ಕೂಡ ಅವರಿಗೆ ಗ್ರ್ಯಾಚ್ಯುಟಿ ಸಿಕ್ಕಿಲ್ಲ. ಜೊತೆಗೆ, ಕಂಪೆನಿಯ ಆರ್ಥಿಕ ಸ್ಥಿತಿ ಕೂಡ ಉತ್ತಮವಾಗಿಲ್ಲ. ಅವರಿಗೆ ಗ್ರ್ಯಾಚ್ಯುಟಿ ಎಲ್ಲಿ ಸಿಗುವುದೆ ಇಲ್ಲವೆನೋ ಎನ್ನುವ ಭಯ ಕಾಡುತ್ತಿದೆ. ಆದರೆ ಕರ್ನಾಟಕ ಸರ್ಕಾರ ತೆಗೆದುಕೊಂಡಿರೋ ಮಹತ್ವದ ನಿರ್ಧಾರದಿಂದ ರಮೇಶ್ ಅಂತಹವರು ಇಂತಹ ತೊಂದರೆ ಎದುರಿಸುವುದು ತಪ್ಪುತ್ತದೆ. ರಾಜ್ಯ ಸರ್ಕಾರ, ಎಲ್ಲಾ ಕಂಪೆನಿಗಳಿಗೂ ಗ್ರ್ಯಾಚ್ಯುಟಿ ವಿಮೆ ಕಡ್ಡಾಯ ಮಾಡಿದೆ. ಈ ವಿಮೆ ಹೇಗೆ ಕೆಲಸ ಮಾಡುತ್ತದೆ ಎನ್ನುವುದನ್ನು ತಿಳಿದುಕೊಳ್ಳೋಣ.