ರೋಶನಿ ಪದೇ ಪದೇ ಮೊಬೈಲ್ ಫೋನ್ ಚೆಕ್ ಮಾಡ್ತಾ ಇದ್ದಾಳೆ. ಯಾವ ಜಾಬ್ ಕನ್ಸಲ್ಟನ್ಸಿಯಿಂದನೂ ಅವಳಿಗೆ ಫೋನ್ ಬಂದಿಲ್ಲ. ದಿನಕ್ಕೆ ಹಲವು ಬಾರಿ ಅವಳು ಮೇಲ್ ಚೆಕ್ ಮಾಡ್ತಾ ಇರ್ಯಾಳೆ. ಯಾವುದಾದರೂ ಒಂದು ಕಂಪನಿಯಿಂದ ಜಾಬ್ ಆಫರ್ ಬರುತ್ತೇನೋ ಅನ್ನೋದು ಅವಳ ನಿರೀಕ್ಷೆ. ಆದರೆ, ದಿನ ಕಳೆದರೂ ಬೇಸರವೇ ಅವಳಿಗೆ ಕಟ್ಟಿಟ್ಟ ಬುತ್ತಿ. ಆ ಬೇಸರದ ಜೊತೆಗೆ, ಅವಳ ಚಿಂತೆಯೂ ಹೆಚ್ಚಾಗುತ್ತಲೇ ಹೋಗುತ್ತಿದೆ. ಅವಳು 8 ಲಕ್ಷ ರೂ. ಎಜುಕೇಶನ್ ಲೋನ್ ತೆಗೆದುಕೊಂಡಿದ್ದಳು. ಅವಳಿಗೆ ಇಂಜಿನಿಯರಿಂಗ್ ಕಾಲೇಜಿಗೆ ಅಡ್ಮಿಶನ್ ಮಾಡಿಸುವ ಸಮಯದಲ್ಲಿ ಅವಳ ತಂದೆ ಆ ಲೋನ್ ಕೊಡಿಸಿದ್ದರು. ಕಂಪನಿಯಲ್ಲಿ ಕೆಲಸ ಸಿಕ್ಕರೆ, ಸಾಲ ಬೇಗ ತೀರಿಹೋಗಬಹುದು ಎಂಬ ನಿರೀಕ್ಷೆ ಅವಳದ್ದಾಗಿತ್ತು. ಬೆಂಗಳೂರಿನಿಂದ ಅಮೆರಿಕದ ವರೆಗೆ ರೋಶ್ನಿ ಕನಸು ಕಂಡಿದ್ದಳು. ಆದರೆ, ಆ ಕನಸು ನುಚ್ಚುನೂರಾಗಿರುವುದು ಅವಳ ಮುಖದಲ್ಲೇ ಕಾಣಿಸುತ್ತಿತ್ತು. ರೋಶ್ನಿ ಕಳೆದ ವರ್ಷ ಬಿಟೆಕ್ ಮುಗಿಸಿದ್ದಾಳೆ. ಆದರೆ, ಅವಳಿಗೆ ಇನ್ನೂ ಕೆಲಸ ಸಿಗಲಿಲ್ಲ. ಕಾಲೇಜಿನಗೆ ಅಡ್ಮಿಶನ್ ಸಿಕ್ಕಾಗ, ತುಂಬಾ ಸ್ಟಾರ್ಟಪ್ಗಳು ಕ್ಯಾಂಪಸ್ ಇಂಟರ್ವ್ಯೂಗೆ ಬರುತ್ತಿದ್ದವು. ಅವಳ ಹಲವು ಸೀನಿಯರ್ಗಳಿಗೆ ಒಳ್ಳೊಳ್ಳೆ ಪ್ಯಾಕೇಜ್ ಸಿಕ್ಕಿವೆ. ಒಳ್ಳೊಳ್ಳೆ ಜಾಬ್ ಕೂಡಾ ಸಿಕ್ಕಿದೆ. ಆದರೆ, ರೋಶ್ನಿಯ ಫೈನಲ್ ಇಯರ್ ಬರುವ ಹೊತ್ತಿಗೆ ಯಾವ ಕಂಪನಿಯೂ ಕಾಲೇಜಿಗೆ ಬಂದಿಲ್ಲ. ರೋಶ್ನಿಯ ಕಥೆ ಅವಳೊಬ್ಬಳದ್ದೇ ಅಲ್ಲ. ದೇಶದ ಲಕ್ಷಾಂತರ ಯುವಕರೂ ಆಕೆಯ ಹಾಗೆಯೇ ಪರಿಸ್ಥಿತಿ ಅನುಭವಿಸುತ್ತಿದ್ದಾರೆ. ಐಟಿ ಕಂಪನಿಗಳು ಕಳೆದ ಎರಡು ದಶಗಳಲ್ಲಿ ಭಾರತೀಯರಿಗೆ ಅಪಾರ ಉದ್ಯೋಗಗಳನ್ನು ಕೊಡುತ್ತಿದ್ದವು. ಆದರೆ, ಕೋವಿಡ್ ನಂತರದ ಕಾಲದಲ್ಲಿ ಯಾವ ಕಂಪನಿಗಳೂ ಉದ್ಯೋಗ ಕೊಡುತ್ತಿಲ್ಲ. ದೊಡ್ಡ ದೊಡ್ಡ ಐಟಿ ಕಂಪನಿಗಳು ಕಳೆದ ವರ್ಷದಿಂದ ನೇಮಕಾತಿಯನ್ನೇ ನಿಲ್ಲಿಸಿಬಿಟ್ಟಿವೆ. ಇನ್ನು ರಿಟೇಲ್ ಮತ್ತು ಇಕಾಮರ್ಸ್ ಸೆಕ್ಟರ್ನಲ್ಲೂ ಪರಿಸ್ಥಿತಿ ಹೀಗೆಯೇ ಇದೆ. ಆರ್ಥಿಕ ಹಿಂಜರಿಕೆಯಿಂದಾಗಿ, ಕಂಪನಿಗಳು ಈಗಾಗಲೇ ಫ್ರೆಶರ್ಗಳನ್ನು ನೇಮಿಸಿಕೊಳ್ಳುವುದನ್ನು ನಿಲ್ಲಿಸಿಬಿಟ್ಟಿವೆ. ಇದರ ಮೇಲೆ ಉದ್ಯೋಗಿಗಳಿಗೆ ಆರ್ಟಿಫಿಶಿಯಲ್ ಇಂಟಲಿಜೆನ್ಸ್ ಕೂಡಾ ಹೊಡೆತ ನೀಡಿದೆ. ಕಳೆದ ವರ್ಷ ಫ್ರೆಶರ್ಗಳನ್ನು ನೇಮಿಸಿಕೊಳ್ಳುವಲ್ಲಿ 30 ಪರ್ಸೆಂಟ್ನಷ್ಟು ಭಾರಿ ಕುಸಿತ ಆಗಿತ್ತು. 2022 ಕ್ಕೆ ಹೋಲಿಸಿದರೆ 2023 ರಲ್ಲಿ ಫ್ರೆಶರ್ಗಳಿಗೆ ಕಂಪನಿಗಳಿಂದ ಜಾಬ್ ಓಪನಿಂಗ್ಗಳಲ್ಲಿ 20 ಪರ್ಸೆಂಟ್ ಇಳಿಕೆಯಾಗಿದೆ. ಕೆಲಸ ಸಿಕ್ಕಮೇಲೂ ನೆಮ್ಮದಿ ಇಲ್ಲ. ಈಗಂತೂ ಪರ್ಮನೆಂಟ್ ಜಾಬ್ ಅನ್ನೋ ಪರಿಸ್ಥಿತಿ ಇಲ್ಲವೇ ಇಲ್ಲ. ಇತ್ತೀಚಿನ ಇಪಿಎಫ್ಒ ಡೇಟಾ ಪ್ರಕಾರ, ಸಂಘಟಿತ ವಲಯದಲ್ಲಿ ಭಾರತದ ಉದ್ಯೋಗವು 30 ತಿಂಗಳಲ್ಲೇ ಅತಿ ಕಡಿಮೆ ಇದೆ. ಈ ಬಾರಿಯ ಬಜೆಟ್ನಲ್ಲಿ ರೋಶನಿಗೆ ಉತ್ತಮ ಭವಿಷ್ಯದ ಗ್ಯಾರಂಟಿ ಬೇಕಿದೆ. ನಮ್ಮ ದೇಶದ ಸ್ಟಾರ್ಟಪ್ ಬೂಮ್ ಇಷ್ಟು ಬೇಗ ಬರ್ಸ್ಟ್ ಆಗಿದ್ದು ಯುವಕರಿಗೆ ಭಾರಿ ನಿರಾಸೆ ಮೂಡಿಸಿದೆ. ಕೆಲಸವೇ ಸಿಗುವುದಿಲ್ಲ ಎಂದಾದರೆ, ಭಾರಿ ಶುಲ್ಕ ತೆತ್ತು ಯಾರು ಕಾಲೇಜುಗಳಿಗೆ ಅಡ್ಮಿಶನ್ ಮಾಡುತ್ತಾರೆ? ದೇಶದಲ್ಲಿ ಉದ್ಯೋಗ ಸೃಷ್ಟಿಯ ಸಂಖ್ಯೆ ಇಳಿತಾ ಇರೋದನ್ನ ನೋಡಿದರೆ, ಶಿಕ್ಷಣ ಸಾಲದಲ್ಲಿ ಸರ್ಕಾರದಿಂದ ನೆರವು ಪಡೆಯಬೇಕಾದ ಪರಿಸ್ಥಿತಿ ರೋಶನಿಗೆ ಬರುತ್ತಿದೆ. ಹೀಗಾಗಿ, ಶಿಕ್ಷಣದಲ್ಲಿ ಹಣದುಬ್ಬರವನ್ನು ಸರ್ಕಾರ ನಿಯಂತ್ರಿಸಬೇಕು ಎಂದು ರೋಶನಿ ಬಯಸಿದ್ದಾರೆ. ಪಾಲಕರ ಬಳಿ ಹಣ ಹೊಂದಿಸಲು ಸಾಧ್ಯವಿಲ್ಲ ಎಂಬ ಮಾತ್ರಕ್ಕೆ ಯುವಕರ ಕನಸು ನುಚ್ಚುನೂರಾಗಬಾರದು. ಜಾಬ್ ಸ್ಕ್ಯಾಮ್ ವಿಷಯದಲ್ಲೂ ಸರ್ಕಾರ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂಬ ನಿರೀಕ್ಷೆಯನ್ನು ರೋಶನಿ ಹೊಂದಿದ್ದಾಳೆ. ಪರೀಕ್ಷೆಯಿಂದ ಅಪಾಯಿಂಟ್ಮೆಂಟ್ವರೆಗೆ ಬೇಗ ಬೇಗ ಎಲ್ಲವೂ ಮುಗಿದು ಹೋಗುವ ಹಾಗೆ ಸರ್ಕಾರ ವ್ಯವಸ್ಥೆ ಮಾಡಬೇಕಿದೆ. ಈ ಎಲೆಕ್ಷನ್ ಬಜೆಟ್ನಲ್ಲಿ ರೋಶನಿಯಂತಹವರ ಕನಸು ನನಸಾಗುತ್ತದೆಯೇ?
ಪರ್ಸನಲ್ ಫೈನಾನ್ಸ್ ಕುರಿತ ಲೆಟೆಸ್ಟ್ ಅಪ್ಡೇಟ್ಗಳಿಗೆ Money9 App ಡೌನ್ಲೋಡ್ ಮಾಡಿಕೊಳ್ಳಿ