ಭಾರತದಲ್ಲಿ ಆರ್ಥಿಕ ಸುಧಾರಣೆಯ ಪರ್ವ ಆರಂಭವಾದಾಗಿನಿಂದಲೂ, ಕೃಷಿ ವಲಯದಿಂದ ದೇಶದ ಜಿಡಿಪಿಗೆ ನೀಡುತ್ತಿರುವ ಕೊಡುಗೆ ಪ್ರಮಾಣದಲ್ಲಿ ಕಡಿಮೆಯಾಗುತ್ತಲೇ ಇದೆ. 1990-91 ರಲ್ಲಿ 35 ಪರ್ಸೆಂಟ್ ಇತ್ತು. ಈಗ ಇದು 2022-23 ರ ಹಣಕಾಸು ವರ್ಷದಲ್ಲಿ ಕೇವಲ 15 ಪರ್ಸೆಂಟ್ಗೆ ಕುಸಿದಿದೆ. ಅಂದರೆ, 32 ವರ್ಷಗಳಲ್ಲಿ ದೇಶದ ಕೃಷಿ ವಲಯದಿಂದ ದೇಶದ ಆರ್ಥಿಕತೆಗೆ ಬರುತ್ತಿರುವ ಕೊಡುಗೆಯ ಪ್ರಮಾಣ 20 ಪರ್ಸೆಂಟ್ ಇಳಿಕೆಯಾಗಿದೆ. ಆದರೆ, ಇದಕ್ಕೆ ಮುಖ್ಯ ಕಾರಣ, ಕೃಷಿ ವಲಯದ ಕುಸಿತವಲ್ಲ. ಬದಲಿಗೆ, ಔದ್ಯಮಿಕ ಮತ್ತು ಸರ್ವೀಸ್ ಸೆಕ್ಟರ್ನ ಬೆಳವಣಿಗೆ ಎನ್ನುವುದನ್ನು ನಾವು ತಿಳಿದುಕೊಳ್ಳಬೇಕು.
ಮೋಹಿತ್ಗೆ ಪರ್ಸನಲ್ ಲೋನ್ ಅಷ್ಟು ಬೇಗ ಅಪ್ರೂವ್ ಆಗಿದ್ದು ನೋಡಿ ಭಾರಿ ಖುಷಿಯಾಗಿದೆ. ಇಡೀ ಪ್ರೋಸೆಸ್ ಆನ್ಲೈನ್ನಲ್ಲಿ ಮುಗಿದುಹೋಗಿದೆ. ಬ್ಯಾಂಕ್ ಶಾಖೆಗೆ ಹೋಗುವ ಅಗತ್ಯವೇ ಇರಲಿಲ್ಲ. ಆದರೆ, ಮೋಹಿತ್ ಸಾಲವನ್ನ ಫೋರ್ಕ್ಲೋಸ್ ಮಾಡುವುದಕ್ಕೆ ಹೋದಾಗ ಬ್ಯಾಂಕ್ ನಿರಾಕರಿಸಿತು. ಇದನ್ನು ಆನ್ಲೈನ್ನಲ್ಲಿ ಮಾಡೋದಕ್ಕಾಗಲ್ಲ. ಬ್ಯಾಂಕ್ಗೆ ಹೋಗಿ ಲೋನ್ ಕ್ಲೋಸ್ ಮಾಡಿಕೊಳ್ಳಬೇಕು ಎಂದಿತು. ಇದಕ್ಕೆ ಕಾರಣ ಏನು ಎಂದು ಮೋಹಿತ್ಗೆ ತಿಳಿಯಲಿಲ್ಲ. ಸಾಲವನ್ನು ಆನ್ಲೈನ್ನಲ್ಲಿ ಕೊಡಬಹುದು ಎಂದಾದರೆ, ಮರುಪಾವತಿಗೆ ಯಾಕೆ ನಾನು ಬ್ಯಾಂಕ್ಗೆ ಹೋಗಬೇಕು? ಎನ್ನುವುದು ಮೋಹಿತ್ ಪ್ರಶ್ನೆ.
ಧ್ರುವ ಆನ್ಲೈನ್ ನಲ್ಲಿ ಆರೋಗ್ಯ ವಿಮೆ ಪಾಲಿಸಿ ನೋಡುತ್ತಿದ್ದಾರೆ. ಆಗ ಅವರ ಫ್ರೆಂಡ್ ಅಭಿಷೇಕ್ ನೀವೇನಾದರೂ ಇನ್ನೊಂದು ಫಾರಿನ್ ಟ್ರಿಪ್ ಪ್ಲಾನ್ ಮಾಡಿದ್ದೀರಾ ಅಂತ ಕೇಳಿದರು. ಅದಕ್ಕೆ ಧ್ರುವ, ಇಲ್ಲ ನಾನು ಹೆಲ್ತ್ ಪಾಲಿಸಿ ನೋಡುತ್ತಿರೋದಾಗಿ ಹೇಳುತ್ತಾರೆ. ಕಳೆದ ಬಾರಿ ಆಸ್ಪತ್ರೆಗೆ ದಾಖಲಾದಾಗ ಅವರು ತಮ್ಮ ಹೂಡಿಕೆಯನ್ನ ಹಿಂಪಡೆದುಕೊಂಡರು. ಅಲ್ಲದೇ ಆಸ್ಪತ್ರೆ ಬಿಲ್ ಪಾವತಿಸಲು ಸಂಬಂಧಿಕರಿಂದ ಸಾಲ ಕೂಡ ಪಡೆಯಬೇಕಾಯಿತು. ಅಭಿಷೇಕ್ ಧ್ರುವ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು ಮತ್ತು ನಾನೂ ಕೂಡ ಹೆಲ್ತ್ ಪಾಲಿಸಿ ಖರೀದಿ ಮಾಡಿದ್ದೇನೆ ಅಂತ ಹೇಳಿದರು. ಆದರೆ ಆ ಹೆಲ್ತ್ ಕವರ್ ಸಾಕಾಗುತ್ತಾ ಅಂತ ಧ್ರುವ, ಅಭಿಷೇಕ್ ರನ್ನು ಕೇಳಿದರು.
PF ಖಾತೆಗಳಲ್ಲಿ KYC ಅನ್ನು ಅಪ್ ಡೇಟ್ ಮಾಡಿಸುವುದು ಅಗತ್ಯವಾಗಿದೆ. ನಿಮ್ಮ PF ಖಾತೆಯಲ್ಲಿ ನಿಮ್ಮ KYC ಅಪೂರ್ಣವಾಗಿದ್ದರೆ ಮತ್ತು ನೀವು ಹಿಂಪಡೆಯಲು ಅರ್ಜಿ ಸಲ್ಲಿಸಿದರೆ, ಅದನ್ನು ತಿರಸ್ಕರಿಸಲಾಗುತ್ತೆ. ಆದ್ದರಿಂದ, ಕ್ಲೈಮ್ಗಾಗಿ ಅರ್ಜಿ ಸಲ್ಲಿಸುವ ಮೊದಲು KYC ಅನ್ನು ಅಪ್ ಡೇಟ್ ಮಾಡೋದು ಅವಶ್ಯಕ.
ಮೊಹ್ಸಿನ್ ಕೆಲವು ತಿಂಗಳ ಹಿಂದೆ ಕ್ರೆಡಿಟ್ ಕಾರ್ಡ್ಗಾಗಿ ಅರ್ಜಿ ಸಲ್ಲಿಸಿದ್ದರು. ಅವರು ಅದರ ಬಗ್ಗೆ ಹೆಚ್ಚು ಯೋಚಿಸಲಿಲ್ಲ. ಎಲ್ಲರ ಬಳಿಯೂ ಕ್ರೆಡಿಟ್ ಕಾರ್ಡ್ ಇದೆ ಅಂತ ಭಾವಿಸಿಕೊಂಡು ತಾನೂ ಕೂಡ ಕಾರ್ಡ್ ಪಡೆಯುತ್ತಾರೆ. ಆದರೆ ಈಗ ಅವರು ಚಿಂತೆಗೆ ಒಳಗಾಗಿದ್ದಾರೆ. ಏಕೆಂದರೆ ಅವರ ಕಾರ್ಡ್ನಲ್ಲಿ ಹೆಚ್ಚಿನ ಸಾಲ ಹೊಂದಿದ್ದಾರೆ. ಅದೂ ಕೂಡ ಹೆಚ್ಚಿನ ಬಡ್ಡಿದರದಲ್ಲಿ. ಈ ವೇಳೆ ಅವರ ಸ್ನೇಹಿತರೊಬ್ಬರು ಬ್ಯಾಲೆನ್ಸ್ ಟ್ರಾನ್ಸ್ಫರ್ ಆಯ್ಕೆ ಇರುವ ಕಾರ್ಡ್ ತೆಗೆದುಕೊಳ್ಳಿ ಎನ್ನುವ ಸಲಹೆ ನೀಡುತ್ತಾರೆ. ಸಾಮಾನ್ಯವಾಗಿ ಇದು ಕಡಿಮೆ ಬಡ್ಡಿದರ ಹೊಂದಿರುತ್ತದೆ. ಅಲ್ಲದೇ ಮರುಪಾವತಿ ಅವಧಿ ಅಧಿಕವಾಗಿರುತ್ತೆ.
ಕಳೆದ ವರ್ಷ ಭಾರತೀಯ ಷೇರು ಮಾರುಕಟ್ಟೆಯ ಪರ್ಫಾಮೆನ್ಸ್ ಅತ್ಯುತ್ತಮವಾಗಿತ್ತು. ಹಣಕಾಸು ವರ್ಷ 2023-24 ರಲ್ಲಿ ಸುಮಾರು ಶೇಕಡ 29 ರಷ್ಟು ರಿಟರ್ನ್ಸ್ ಕೊಟ್ಟಿದ್ದು, ವಿಶ್ವದ ಷೇರು ಮಾರುಕಟ್ಟೆಯಲ್ಲಿ ಎರಡನೇ ಸ್ಥಾನಕ್ಕೇರಿದೆ. ಮಾರುಕಟ್ಟೆಯ ಈ ಸದೃಢ ಪರ್ಫಾಮೆನ್ಸ್ ಗೆ ಸಾಂಸ್ಥಿಕ ಹೂಡಿಕೆದಾರರ ಖರೀದಿ, ಉತ್ತಮ ವಿದೇಶಿ ಸೂಚನೆಗಳು, ಸದೃಢ ಆರ್ಥಿಕ ಸೂಚಕಗಳು ಕಾರಣವಾಗಿವೆ. ಆದರೆ, ಸದೃಢ ಆರ್ಥಿಕ ಪ್ರಗತಿ ಮತ್ತು ಷೇರು ಮಾರುಕಟ್ಟೆಯ ಓಟದ ನಡುವೆ ರಫ್ತು ಆಧಾರಿತ ಕಂಪೆನಿಗಳ ಷೇರುಗಳ ಕಥೆ ಏನು? ಈ ಕಂಪೆನಿಗಳು ಹೇಗೆ ಪರ್ಫಾಮ್ ಮಾಡಿವೆ? ಈ ಷೇರುಗಳಿಗಾಗಿ ಯಾವ ಸ್ಟ್ರ್ಯಾಟೆಜಿ ಇರಬೇಕು? ಇವೆಲ್ಲವನ್ನ ಅರ್ಥ ಮಾಡ್ಕೋಳೋಣ ಬನ್ನಿ..
ಇತ್ತೀಚಿನ ವರ್ಷಗಳಲ್ಲಿ ಡಿಮ್ಯಾಟ್ ಖಾತೆಗಳ ಸಂಖ್ಯೆ ವೇಗವಾಗಿ ಹೆಚ್ಚುತ್ತಿದೆ. ಷೇರು ಮಾರುಕಟ್ಟೆ ಹೂಡಿಕೆಗೆ ಸಂಬಂಧಿಸಿ ಜನರಲ್ಲಿ ಹೆಚ್ಚುತ್ತಿರುವ ಜಾಗೃತಿಯೇ ಇದಕ್ಕೆ ಪ್ರಮುಖ ಕಾರಣ. ಇದಲ್ಲದೆ SEBIಯ ಪ್ರಯತ್ನಗಳು ಮತ್ತು ರಿಸ್ಕ್ ತೆಗೆದುಕೊಳ್ಳುವ ಆಲೋಚನೆಯಲ್ಲಿರು ವ್ಯಕ್ತಿಗಳು, ಮಾರ್ಕೆಟ್ ಕಡೆ ಮುಖ ಮಾಡುತ್ತಿರುವ ಯುವಕರು ಹೆಚ್ಚಾಗಿದ್ದಾರೆ. ಈ ಎಲ್ಲ ಕಾರಣಗಳಿಂದ ಡಿಮ್ಯಾಟ್ ಖಾತೆಗಳ ಸಂಖ್ಯೆ ಹೆಚ್ಚುತ್ತಿದೆ. ಹಿಂದೆ ಜನರು ತಮ್ಮ ಹಣವನ್ನು ಉಳಿತಾಯ ಖಾತೆಗಳಲ್ಲಿ ವರ್ಷಗಳವರೆಗೆ ಇಡುತ್ತಿದ್ದರು. ಆದರೆ ಈಗ ಅನೇಕರು ತಮ್ಮ ಹಣವನ್ನು ಷೇರುಗಳಲ್ಲಿ ಹೂಡಿಕೆ ಮಾಡಲು ಪ್ರಾರಂಭಿಸಿದ್ದಾರೆ. ಜನವರಿ 2024 ರ ಹೊತ್ತಿಗೆ ದೇಶದಲ್ಲಿ 14.39 ಕೋಟಿ ಡಿಮ್ಯಾಟ್ ಖಾತೆಗಳಿರುವುದೆ ಇದಕ್ಕೆ ಸಾಕ್ಷಿ.
ಶೋಭಿತಾ ಮುಂದಿನ ತಿಂಗಳು ಮಾರಿಷಸ್ಗೆ ಟ್ರಿಪ್ ಹೋಗುವ ಪ್ಲಾನ್ ಮಾಡಿದ್ದಾರೆ. ಆಕೆ ಸುಮಾರು ಸಮಯದಿಂದಲೂ ಒಂದು ಟ್ರಿಪ್ಗೆ ಹೋಗಬೇಕು ಅಂತ ಅಂದುಕೊಂಡಿದ್ದಳು. ಹೀಗಾಗಿ, ಒಂದು ವಾರದ ಹಿಂದೆ ಇಂಟರ್ನ್ಯಾಷನಲ್ ಕ್ರೆಡಿಟ್ ಕಾರ್ಡ್ ಕೂಡಾ ಕೈಗೆ ಬಂದಿದೆ. ಒಂದು ಫಾರೆಕ್ಸ್ ಕಾರ್ಡ್ ಖರೀದಿ ಮಾಡಬೇಕು ಅಂತಲೂ ಅಂದುಕೊಂಡಿದ್ದಾಳೆ. ಹೆಚ್ಚು ಪೇಮೆಂಟ್ ಆಪ್ಷನ್ ಇದ್ದಷ್ಟೂ ಚೆನ್ನಾಗಿರುತ್ತದೆ ಅನ್ನೋದು ಅವಳ ಅಭಿಪ್ರಾಯ. ಆದರೆ, ಅವಳು ಮಾರಿಷಸ್ನಲ್ಲಿ ಯುಪಿಐ ಮೂಲಕವೂ ಪೇಮೆಂಟ್ ಮಾಡಬಹುದು ಎಂದು ಅವಳಿಗೆ ಗೊತ್ತಿಲ್ಲ. ಹೌದು... ಮಾರಿಷಸ್ನಂತಹ ಹಲವು ದೇಶಗಳಲ್ಲಿ ನೀವು ಯುಪಿಐ ಕ್ಯೂಆರ್ ಕೋಡ್ ಮೂಲಕ ಪೇಮೆಂಟ್ ಮಾಡಬಹುದು. UPI ಹಲವು ದೇಶಗಳಲ್ಲಿ ಇದೆ.
ದೀರ್ಘ ಕಾಲದಿಂದ ಅಭಯ್ ಕ್ರೆಡಿಟ್ ಕಾರ್ಡ್ ಬಳಕೆ ಮಾಡುತ್ತಿದ್ದಾರೆ. ಅವರ ಮನೆಯಲ್ಲಿ ಅಭಯ್ ಬಳಿ ಮಾತ್ರ ಕ್ರೆಡಿಟ್ ಕಾರ್ಡ್ ಇದೆ. ಅಭಯ್ ಪುತ್ರ ಅಂಕಿತ್ ಈಗಷ್ಟೇ ಕಾಲೇಜಿಗೆ ಹೋಗಲು ಪ್ರಾರಂಭಿಸಿದ್ದಾನೆ. ಈಗ ತನಗೂ ಒಂದು ಕ್ರೆಡಿಟ್ ಕಾರ್ಡ್ ಬೇಕೆಂದು ಪಟ್ಟು ಹಿಡಿದಿದ್ದಾನೆ. ಮಗನಿಗಾಗಿ ಹೊಸ ಕ್ರೆಡಿಟ್ ಕಾರ್ಡ್ ಪಡೆಯಲು ಅಭಯ್ ಗೆ ಮನಸಿಲ್ಲ. ಹೊಸದು ಪಡೆದರೆ ಆ ಬಿಲ್ ಗಳನ್ನು ಅಭಯ್ ಅವರೇ ಪಾವತಿ ಮಾಡಬೇಕಿದೆ. ಮಗ ಬೇಕಾಬಿಟ್ಟಿ ಖರ್ಚು ಮಾಡಿದರೆ ಅನ್ನೋ ಆತಂಕ ಸಹ ಅವರನ್ನು ಕಾಡುತ್ತಿದೆ. ಹಾಗಾದರೆ ಈಗ ಅಭಯ್ ಏನ್ ಮಾಡಬಹುದು?
ಕೋವಿಡ್ ಸಾಂಕ್ರಾಮಿಕದ ನಂತರ, ಭಾರತ ಸೇರಿದಂತೆ ಜಗತ್ತಿನಾದ್ಯಂತ ಷೇರು ಮಾರುಕಟ್ಟೆ ಕ್ಷಿಪ್ರ ಚೇತರಿಕೆ ಕಂಡಿದೆ. ಹಣಕಾಸು ವರ್ಷ 21 ರಲ್ಲಿ, ದೇಶದ ಪ್ರಮುಖ ಸೂಚ್ಯಂಕ ನಿಫ್ಟಿ ದಾಖಲೆಯ ಶೇಕಡ 71 ರಷ್ಟು ಪ್ರಗತಿ ದಾಖಲಿಸಿತ್ತು. ಹಾಗೇ ಹಣಕಾಸು ವರ್ಷ 22ರಲ್ಲಿ ಶೇಕಡ 19 ರಷ್ಟು ಏರಿಕೆ ಕಂಡಿತು. ಆದಾಗ್ಯೂ, ಸಾಂಕ್ರಾಮಿಕದ ನಂತರ ಆರ್ಥಿಕತೆಯ ಮೇಲೆ ಪರಿಣಾಮ ಬೀರಲ್ಪಟ್ಟ ವಲಯ ಯಾವುದು ಎಂದರೆ ಅದು ಗ್ರಾಮೀಣ ವಲಯ.