-
ಸಮೀಕ್ಷೆಯ ಪ್ರಕಾರ, ಬಿಹಾರವು ದೇಶದ ಎಲ್ಲಾ ರಾಜ್ಯಗಳಲ್ಲಿ ಅತ್ಯಂತ ಬಡವಾಗಿದೆ. ಬಿಹಾರದ ಕುಟುಂಬಗಳ ಸರಾಸರಿ ಮಾಸಿಕ ಆದಾಯ ಕೇವಲ 17,567 ರೂ. ಇದೆ. ಇನ್ನು 18,519 ರೂ. ಮಾಸಿಕ ಆದಾಯದೊಂದಿಗೆ ಬಡತನದಲ್ಲಿ ಒಡಿಶಾ ಎರಡನೇ ಸ್ಥಾನದಲ್ಲಿದ್ದರೆ 18,863 ರೂ. ಮಾಸಿಕ ಆದಾಯದೊಂದಿಗೆ ಜಾರ್ಖಂಡ್ ಮೂರನೇ ಸ್ಥಾನದಲ್ಲಿದೆ. ತಮ್ಮ ಮಾಸಿಕ ಖರ್ಚುಗಳನ್ನು ಪೂರೈಸಲು ಸಾಧ್ಯವಾಗದ ಹೆಚ್ಚಿನ ಕುಟುಂಬಗಳು ಈ ರಾಜ್ಯದಲ್ಲೇ ಇವೆ.
-
ಕುಟುಂಬಗಳಲ್ಲಿ ಉಳಿತಾಯ ಹೆಚ್ಚಾಗಲು ಕೊರೋನಾ ಕೂಡ ಪ್ರಮುಖ ಕಾರಣ ಎನ್ನುವುದು ಸಮೀಕ್ಷೆಯಲ್ಲಿ ಕಂಡುಬಂದ ಪ್ರಮುಖ ಅಂಶ. ಕೊರೋನಾ ಪರಿಣಾಮ ಜನರ ಗಳಿಕೆಯ ಮೇಲೆ ಕಾಣಿಸುತ್ತಿತ್ತು. ಕೊರೋನಾ ನಂತರದಲ್ಲಿ ಜನ ಭವಿಷ್ಯದ ಬಗ್ಗೆ ಮತ್ತಷ್ಟು ಚಿಂತಿಸಿದರು. ಉಳಿತಾಯದ ಮಹತ್ವ ಅರಿತುಕೊಂಡರು. ಕೊರೋನಾ ಪ್ರಭಾವ ಕಡಿಮೆಯಾದ ತಕ್ಷಣ, ಜನರು ತಮ್ಮ ಉಳಿತಾಯವನ್ನು ಹೆಚ್ಚಿಸಲು ಪ್ರಾರಂಭಿಸಿದರು.
-
ಮುಂದಿನ ಆರು ತಿಂಗಳಲ್ಲಿ ಕಾರು, ಬೈಕ್, ಮತ್ತು ಸ್ಮಾರ್ಟ್ಫೋನ್ಗಳಿಗೆ ಬೇಡಿಕೆ ಹೇಗೆ ಹೆಚ್ಚಲಿದೆಯಾ? ಹೌದು ಎನ್ನುತ್ತಿದೆ Money9ನ ಪರ್ಸನಲ್ ಫೈನಾನ್ಸ್ ಸಮೀಕ್ಷೆ. ಮುಂದಿನ 6 ತಿಂಗಳಲ್ಲಿ ಎಷ್ಟು ಭಾರತೀಯ ಕುಟುಂಬಗಳು ತಮಗಾಗಿ ದ್ವಿಚಕ್ರ ವಾಹನ ಅಥವಾ ಕಾರು ಖರೀದಿಸಲು ಯೋಜಿಸುತ್ತಿವೆ ಎಂಬ ಮಾಹಿತಿಯನ್ನು ಸಮೀಕ್ಷೆ ತೆರೆದಿರಿಸಿದೆ.
-
ಸಮೀಕ್ಷೆಯ ಪ್ರಕಾರ, ಕೇವಲ ಶೇ. 24ರಷ್ಟು ಭಾರತೀಯರು ಮಾತ್ರ ತೆರಿಗೆ ಪಾವತಿಸಲು ಸಂಪೂರ್ಣ ಸಿದ್ಧರಿದ್ದಾರೆ. ಇನ್ನು ಶೇ. 29 ರಷ್ಟು ಭಾರತೀಯರು ತೆರಿಗೆ ಪಾವತಿಸಲು ಬಯಸುತ್ತಿದ್ದರೂ ಒಂದು ಮಿತಿಯೊಳಗಿನ ತೆರಿಗೆ ನೀಡಲು ಸಿದ್ಧರಿದ್ದಾರೆ. ಸಮೀಕ್ಷೆಯ ಅಂಕಿಅಂಶಗಳ ಪ್ರಕಾರ, ಸುಮಾರು ಅರ್ಧದಷ್ಟು ಭಾರತೀಯರು ಕಡಿಮೆ ತೆರಿಗೆ ದರ ಬಯಸುತ್ತಿದ್ದಾರೆ.
-
ಭಾರತೀಯರಿಗೆ ಚಿನ್ನದ ಮೇಲೆ ಮೊದಲಿನಿಂದಲೂ ಹೆಚ್ಚಿನ ಮೋಹ. ಸೌಂದರ್ಯ ಇಮ್ಮಡಿಗೊಳಿಸುವ ಚಿನ್ನ ಮುಂದಿನ ಭವಿಷ್ಯ ರೂಪಿಸುವ ಕೆಲಸವನ್ನು ರೂಪಿಸಿಕೊಳ್ಳಲು ಇದು ಅತ್ಯಂತ ಉಪಯುಕ್ತವಾಗಿದೆ. ಭಾರತೀಯ ಕುಟುಂಬಗಳು ಯಾವಾಗಲೂ ತಮ್ಮ ಉಳಿತಾಯವನ್ನು ಚಿನ್ನದ ಮೇಲೆ ಹೂಡಿಕೆ ಮಾಡುತ್ತಿವೆ. ಆದರೆ ಕಳೆದ ಒಂದು ವರ್ಷದಲ್ಲಿ ಗಮನಾರ್ಹ ಏರಿಕೆ ಕಂಡುಬಂದಿದೆ. Money9 ನ ಭಾರತದ ಪಲ್ಸ್ ಪರ್ಸನಲ್ ಫೈನಾನ್ಸ್ ಸಮೀಕ್ಷೆಯು 2022 ರಲ್ಲಿ ಶೇ. 15 ರಷ್ಟು ಕುಟುಂಬಗಳು ಚಿನ್ನದ ಮೇಲೆ ಉಳಿತಾಯ ಮಾಡುತ್ತಿದ್ದರೆ 2023 ರಲ್ಲಿಈ ಪ್ರಮಾಣ ಶೇ. 21ಕ್ಕೆ ಏರಿದೆ. ಚಿನ್ನದ ದರ ನಿರಂತರವಾಗಿ ಏರುತ್ತಿರುವುದು ಈ ಆಕರ್ಷಣೆಗೆ ಒಂದು ಪ್ರಮುಖ ಕಾರಣ. ಕಳೆದ ಒಂದು ವರ್ಷದಲ್ಲಿ ಚಿನ್ನ ಅತ್ಯುತ್ತಮ ಆದಾಯವನ್ನು ನೀಡಿದೆ. ಸರ್ಕಾರ ಸಾವರಿನ್ ಗೋಲ್ಡ್ ಬಾಂಡ್ ಪರಿಚಯಿಸಿದ್ದು ಚಿನ್ನದತ್ತ ಒಲವು ಹೆಚ್ಚಲು ಇನ್ನೊಂದು ಕಾರಣವಾಗಿದೆ.
-
ರಾಷ್ಟ್ರದಲ್ಲಿ ಹೆಚ್ಚುತ್ತಿರುವ ನಿರುದ್ಯೋಗ ಸಮಸ್ಯೆ ಒಂದು ಕಡೆಯಾದರೆ ಇನ್ನೊಂದು ಕಡೆ ಉದ್ಯೋಗ ಕಳೆದುಕೊಳ್ಳುವ ಭಯದಲ್ಲಿರುವ ಉದ್ಯೋಗಿಗಳ ದೊಡ್ಡ ವರ್ಗವಿದೆ. ದೇಶದ 20 ರಾಜ್ಯಗಳ 115 ಜಿಲ್ಲೆಗಳಲ್ಲಿ ಭಾರತೀಯ ಕುಟುಂಬಗಳ ಮೇಲೆ ನಡೆಸಲಾದ Money9 ನ ವೈಯಕ್ತಿಕ ಹಣಕಾಸು ಸಮೀಕ್ಷೆಯ ಪ್ರಕಾರ ಶೇಕಡಾ 24 ರಷ್ಟು ಜನರು ತಮ್ಮ ಉದ್ಯೋಗವನ್ನು ಕಳೆದುಕೊಳ್ಳುವ ಭಯದಲ್ಲಿದ್ದಾರೆ ಎನ್ನುವುದು ಗೊತ್ತಾಗಿದೆ.
-
ಕಳೆದ ಒಂದು ವರ್ಷದಲ್ಲಿ ದೇಶದಲ್ಲಿ ಸಾಲ ಪಡೆಯುವ ಭಾರತೀಯ ಕುಟುಂಬಗಳ ಸಂಖ್ಯೆ ದ್ವಿಗುಣಗೊಂಡಿದೆ. ಈ ವರ್ಷದ ಆಗಸ್ಟ್ ಮತ್ತು ನವೆಂಬರ್ ನಡುವೆ ನಡೆಸಿದ ಸಮೀಕ್ಷೆಯು ಭಾರತದಲ್ಲಿ ಶೇ. 22 ಕುಟುಂಬಗಳು ಸಾಲ ಪಡೆದಿವೆ. 2022ರ ಇದೇ ಅವಧಿಯಲ್ಲಿ ಸಾಲ ಪಡೆಯುವ ಭಾರತೀಯ ಕುಟುಂಬಗಳ ಸಂಖ್ಯೆ ಶೇ. 11ರಷ್ಟಿತ್ತು.
-
ಭಾರತೀಯ ಕುಟುಂಬಗಳಿ ಹಣದುಬ್ಬರ ಅಂದರೆ ಬೆಲೆ ಏರಿಕೆ ಸಂಕಟ ಕಾಡುತ್ತಿದೆ. ಆಹಾರ ಪದಾರ್ಥಗಳ ಖರ್ಚು ಜೇಬಿಗೆ ಕನ್ನ ಹಾಕುತ್ತಿದೆ. ಇದು ಅಲ್ಲದೆ ಕೋವಿಡ್ ಮಹಾಮಾರಿ ಕುಟುಂಬಗಳ ಗಳಿಕೆಗೆ ದೊಡ್ಡ ಹೊಡೆತವನ್ನು ನೀಡಿದೆ. ಇದು ಭಾರತೀಯ ಕುಟುಂಬಗಳ ಉಳಿತಾಯದ ಮೇಲೂ ಪರಿಣಾಮ ಬೀರಿದೆ. ಅಗತ್ಯ ವೆಚ್ಚಗಳನ್ನು ಪೂರೈಸಲು ಕುಟುಂಬಗಳು ತಮ್ಮ ಉಳಿತಾಯ ಖರ್ಚು ಮಾಡುವಂತಹ ಸ್ಥಿತಿಯಲ್ಲಿವೆ. ಭಾರತದ ಪಲ್ಸ್ ಪರ್ಸನಲ್ ಫೈನಾನ್ಸ್ ಸರ್ವೆ ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರಗಳನ್ನು ನೀಡಿದೆ. ಇಲ್ಲಿ ದೊರೆತ ಅಂಕಿಅಂಶಗಳು ಸರ್ಕಾರ ಮತ್ತು ಪಾಲಿಸಿ ಮೇಕರ್ ಗಳು ಮುಂದೆ ಯಾವ ಹೆಜ್ಜೆ ಇಡಬೇಕು ಎಂದು ತಿಳಿಸುತ್ತಿವೆ.
-
ಹಾಗಿದ್ದರೆ ಕುಟುಂಬದ ಆದಾಯ ಮತ್ತು ಗಳಿಸುವ ಸದಸ್ಯರ ಸಂಖ್ಯೆಯಲ್ಲಿ ಹೆಚ್ಚಳವಾಗಲು ಕಾರಣವೇನು? ಎನ್ನುವುದನ್ನು ತಿಳಿದುಕೊಳ್ಳಬೇಕು. ವಾಸ್ತವವಾಗಿ, ಕರೋನಾ ಸಮಯದಲ್ಲಿ, ನಗರಗಳಲ್ಲಿ ವಾಸಿಸುವ ಕುಟುಂಬಗಳು ಹಳ್ಳಿಗಳಿಗೆ ವಲಸೆ ಹೋಗಿದ್ದವು.
-
ಭಾರತೀಯ ಕುಟುಂಬಗಳ ಸರಾಸರಿ ಆದಾಯ ಎಷ್ಟು? ಯಾವ ರಾಜ್ಯದ ಕುಟುಂಬಗಳು ಹೆಚ್ಚು ಸಂಪಾದಿಸುತ್ತಿವೆ? ರಾಷ್ಟ್ರೀಯ ಸರಾಸರಿ ಎಷ್ಟಿದೆ? ಯಾವ ರಾಜ್ಯದ ಕುಟುಂಬಗಳು ಕಡಿಮೆ ಆದಾಯ ಗಳಿಸುತ್ತಿವೆ? ಕಳೆದ ವರ್ಷಕ್ಕೂ ಈ ವರ್ಷಕ್ಕೂ ಆಗಿರುವ ವ್ಯತ್ಯಾಸವೆಷ್ಟು? ಕಳೆದ ಐದು ವರ್ಷಗಳಲ್ಲಿ ಕುಟುಂಬಗಳ ಆರ್ಥಿಕ ಸ್ಥಿತಿ ಹೇಗಿದೆ? ಭಾರತೀಯ ಕುಟುಂಬಗಳ ಉಳಿತಾಯದ ನೆಚ್ಚಿನ ಆಯ್ಕೆ ಯಾವುದು? ಚಿನ್ನದಲ್ಲಿ ಅತಿ ಹೆಚ್ಚಿನ ಉಳಿತಾಯ ಮಾಡುತ್ತಿರುವ ನಗರಗಳು ಯಾವುವು?