Home > Uncategorized
ಈ ಸಂದರ್ಭದಲ್ಲಿ 2022ರ ಜೀನಿವಾ ಸಭೆಯಲ್ಲಿನ ಭಾರತದ ನಿಲುವು ಮುಖ್ಯವಾಯಿತು. ಭಾರತ ಅಲ್ಲಿ ಮುಖ್ಯ ಭೂಮಿಕೆ ನಿಭಾಯಿಸಿತ್ತು. ಮೀನುಗಾರಿಕೆ ಮೇಲೆ ನೀಡಿರುವ ಸಬ್ಸಿಡಿ ಕಡಿತದ ವಿಚಾರ ಅಲ್ಲಿ ಗೊಂದಲ ಸೃಷ್ಟಿಸಿತ್ತು. ಈ ಸಭೆಯಲ್ಲಿ ಭಾರತದ ವಾಣಿಜ್ಯ ಸಚಿವ ಪಿಯೂಷ್ ಗೋಯಲ್ ನೇತೃತ್ವದ ಭಾರತೀಯ ತಂಡವು ಅಭಿವೃದ್ಧಿಶೀಲ ರಾಷ್ಟ್ರಗಳಿಗೆ ಗಮನಾರ್ಹ ಲಾಭವನ್ನು ತಂದುಕೊಟ್ಟಿತ್ತು.
ಡೀಲ್ ಮೇಕರ್ ವರ್ಸಸ್ ಡೀಲ್ ಬ್ರೇಕರ್ ಎಂಬ ಚರ್ಚೆ ಪಿಯೂಷ್ ಗೋಯಲ್ ಮೇಲೆ ಆರಂಭವಾಯಿತು. ಜೂನ್ 2022 ರಲ್ಲಿ ಜಿನೀವಾದಲ್ಲಿ ನಡೆದ ಕೊನೆಯ ಡಬ್ಲ್ಯುಟಿಒ ಸಭೆಯಿಂದ ಡೀಲ್ ಮೇಕರ್ ಎಂಬ ಪದ ಹುಟ್ಟಿಕೊಂಡಿತು.
ಇವತ್ತಿಂದ ನಂಗೂ-ನಿಂಗೂ ಯಾವ್ ಸಂಬಂಧವೂ ಇಲ್ಲ. ನನ್ನ ಆಸ್ತಿಯಲ್ಲಿ ನಿನಗೆ ಒಂದೇ-ಒಂದ್ ನಯಾಪೈಸಾನೂ ಸಿಗುವುದಿಲ್ಲ.... ಈ ಸೂಪರ್ ಡೈಲಾಗ್ನ ನೀವು ಸಿನಿಮಾಗಳಲ್ಲಿ ನೋಡಿಯೇ ನೋಡಿರುತ್ತೀರಾ. ತನ್ನ ಇಷ್ಟದ ಪ್ರಕಾರ ನಡೆಯದ ಅಹಂಕಾರಿ ಮಗನ ಮುಂದೆ ಶ್ರೀಮಂತ ಅಪ್ಪ ಹೊಡೆಯೋ ಕಾಮನ್ ಡೈಲಾಗ್ ಇದು. ಕೇವಲ ಶ್ರೀಮಂತ ಜನರು ಮಾತ್ರವೇ ವಿಲ್ ಬರೆಯುತ್ತಾರೆ. ಹಾಗೂ ತಮ್ಮ ವಾರಸುದಾರಿಕೆಯ ಬಗ್ಗೆ ಒಂದು ಯೋಜನೆ ಹೊಂದಿರುತ್ತಾರೆ ಎಂದು ನೀವು ತಿಳಿದುಕೊಂಡಿದ್ದರೆ ಅದು ತಪ್ಪು.
ಪ್ರತಿ ಬಿಸ್ಕೆಟ್ ಬೆಲೆ 75 ಪೈಸೆ ಎನ್ನುವುದು ಪಿ ದಿಲ್ಲಿಬಾಬು ಅವರ ಲೆಕ್ಕ. ಕಂಪನಿಯು ದಿನಕ್ಕೆ ಸುಮಾರು 50 ಲಕ್ಷ ಬಿಸ್ಕೆಟ್ ಪ್ಯಾಕೆಟ್ಗಳನ್ನು ಉತ್ಪಾದಿಸುತ್ತದೆ. ಇದರ ಆಧಾರದ ಮೇಲೆ ಸಂಸ್ಥೆಯು ಸಾರ್ವಜನಿಕರಿಗೆ ಪ್ರತಿದಿನ 29 ಲಕ್ಷ ರೂ.ಗೂ ಹೆಚ್ಚು ವಂಚನೆ ಮಾಡುತ್ತಿತ್ತು ಎನ್ನುವುದು ಅವರ ಆರೋಪ.
ವ್ಯಾಪಾರ ಮತ್ತು ಉದ್ಯಮ ಸಂಸ್ಥೆ ಹಾಗೂ ಇತರ ಸಂಬಂಧಿತರೊಂದಿಗೆ ಸಮಾಲೋಚನೆ ನಡೆಸಿ ಪಾದರಕ್ಷೆ ಉತ್ಪನ್ನಗಳಿಗೆ ಗುಣಮಟ್ಟ ಪ್ರಮಾಣ ಹೇಗಿರಬೇಕೆಂದು ನಿರ್ಧರಿಸಲಾಗಿದೆ. ಸಣ್ಣ ಮತ್ತು ಅತಿಸಣ್ಣ ಮಟ್ಟದ ಕೈಗಾರಿಕೆಗಳು ಈ ಗುಣಮಟ್ಟಕ್ಕೆ ಹೊಂದಿಕೊಳ್ಳಲು ಅನುವಾಗುವಂತೆ ಅವರಿಗೆ ಹೆಚ್ಚು ಕಾಲಾವಕಾಶ ಕೊಡಲಾಗುತ್ತಿದೆ ಎಂದು ಪ್ರಮೋದ್ ಕುಮಾರ್ ತಿವಾರಿ ಹೇಳಿದ್ದಾರೆ.
ಕಾರು ಖರೀದಿ ಮಾಡುವುದು ಬೆಸ್ಟಾ? ಅಥವಾ ಲೀಸ್ ಗೆ ಪಡೆದುಕೊಳ್ಳುವುದು ಬೆಸ್ಟಾ? ಒಂದು ಸಮಗ್ರ ವಿಶ್ಲೇಷಣೆ ನಿಮ್ಮ ಮುಂದಿದೆ.
ಭಾರತದ ಶ್ರೀಮಂತರ ಪಟ್ಟಿಯಲ್ಲಿಯೂ ಮಹತ್ವದ ಬದಲಾವಣೆಯಾಗಿದೆ. ಎರಡು-ಮೂರು ದಿನಗಳಿಂದ ಅದಾನಿ ಗ್ರೂಪ್ ಕಂಪನಿಗಳ ಷೇರುಗಳ ಕುಸಿತ ಕಂಡಿದ್ದು ಗೌತಮ್ ಅದಾನಿ ವಿಶ್ವದ ಶ್ರೀಮಂತರ ಪಟ್ಟಿಯಲ್ಲಿ 18ನೇ ಸ್ಥಾನದಿಂದ 19ನೇ ಸ್ಥಾನಕ್ಕೆ ಕುಸಿದಿದ್ದಾರೆ.
ಬ್ಯಾಂಕ್ ನಲ್ಲಿ ಹಣ ಹೂಡಿಕೆ ಮಾಡೋದಕ್ಕೆ ಜನ ಹಿಂದೇಟು ಹಾಕುವ ಕಾಲ ಬಂದಿದೆ.
ಈಗ, ಬ್ಯಾಂಕುಗಳ ಉಳಿತಾಯ ಖಾತೆಗಳ ಮೇಲಿನ ಬಡ್ಡಿ ಅಷ್ಟೇನೂ ಗಮನಾರ್ಹವಾಗಿ ಏರುತ್ತಿಲ್ಲ. ಬದಲಿಗೆ, ಲಿಕ್ವಿಡ್ ಫಂಡ್ಗಳ ಮೇಲಿನ ಪ್ರತಿಫಲಗಳಲ್ಲಿ ಏರಿಕೆಯಾಗುತ್ತಿದೆ.
ಎರಡು ಸಾವಿರ ರೂ ಮುಖಬೆಲೆಯ ನೋಟುಗಳನ್ನು ಚಲಾವಣೆಯಿಂದ ಹಿಂಪಡೆಯಲು ಭಾರತೀಯ ರಿಸರ್ವ್ ಬ್ಯಾಂಕ್ ನಿರ್ಧರಿದ್ದು ಶಾಕ್ ನೀಡಿದೆ. ಈ ಕರೆನ್ಸಿ ನೋಟುಗಳು ಕಾನೂನಾತ್ಮಕವಾಗಿ ಸಿಂಧುವಾಗಿ ಮುಂದುವರಿಯಲಿವೆ.